ನವದೆಹಲಿ, ಡಿ 18(DaijiworldNews/HR): ಅರುಣಾಚಲ ಪ್ರದೇಶದಲ್ಲಿನ ವಾಸ್ತವಿಕ ಗಡಿಯಲ್ಲಿ ಅತಿಕ್ರಮಣ ಮಾಡಿದ ಚೀನಾವನ್ನು ಶಿಕ್ಷಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಚೀನಾಕ್ಕೆ 'ಬಹುಮಾನ' ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
"ಚೀನಾದ ಆಕ್ರಮಣವು ಹೆಚ್ಚುತ್ತಿರುವಾಗ, ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಾಗ, ಬಿಜೆಪಿ ಸರಕಾರವು ಎಲ್ಲವೂ ಸರಿಯಾಗಿದೆ ಎಂಬ ಕಥಾಹಂದರವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಚೀನಾದ ಆಕ್ರಮಣವು ಹೆಚ್ಚಾದಾಗ ನಂತರದ ವರ್ಷದಲ್ಲಿ ನಾವು 95 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದು, ನಮಗೆ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.