ಬಾಗಲಕೋಟೆ, ಡಿ 18( DaijiworldNews/MS): "ಆಯಾ ಸಮುದಾಯಕ್ಕೆ, ತಮ್ಮದೇ ಸಮುದಾಯದವರು ಸಿಎಂ ಆಗಲಿ ಎಂಬ ಆಸೆ ಇರುವುದು ಸಹಜ. ಆದರೆ ಕಾಂಗ್ರೆಸ್ ನಲ್ಲಿ ಜಾರಿ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ" ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಬೀಳಗಿ ತಾಲೂಕಿನ ಅನಗವಾಡಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದಲ್ಲಿ ಜಾತಿಯಾಧಾರದಲ್ಲಿ ಮುಖ್ಯಮಂತ್ರಿಯನ್ನು ಆರಿಸುವುದಿಲ್ಲ. ಆ ಕಾಲಕ್ಕೆ ಯಾರು ಸಮರ್ಥರಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ " ಎಂದು ತಿಳಿಸಿದ್ದಾರೆ.
"ಇನ್ನು ದಲಿತ ಮುಖ್ಯಮಂತ್ರಿ ಆಗಬೇಕೆಂದು ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರು ಆಸೆ ಪಡುವುದು ಸಹಜ, ಅದನ್ನು ತಡೆಯಲು ಸಾಧ್ಯವಿಲ್ಲ. ಈಗ ಜಾತಿ ಆಧಾರದ ಮೇಲೆ ರಾಜಕೀಯ ನಿಂತಿರುವುದು ದುರ್ದೈವ" ಎಂದು ಹೇಳಿದ್ದಾರೆ.