ಚಿಕ್ಕಮಗಳೂರು, ಡಿ 18( DaijiworldNews/MS): ದತ್ತಜಯಂತಿಗೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿ ದುಷ್ಕೃತ್ಯ ನಡಸಲು ಮುಂದಾಗಿದ್ದ ಪ್ರಕರಣ ತಲೆಮರೆಸಿಕೊಂಡಿದ್ದ ಓರ್ವ ಆರೋಪಿ ನೇರವಾಗಿ ಕೋರ್ಟಿಗೆ ಹಾಜರಾಗಿದ್ದಾನೆ.
ಚಿಕ್ಕಮಗಳೂರು ನಗರದ ಗೌರಿ ಕಾಲುವೆ ನಿವಾಸಿ ಆಜಂ ಪಾಷಾ. ನ್ಯಾಯಾಲಕ್ಕೆ ಶರಣಾದ ಆರೋಪಿ.
ಈ ಹಿಂದೆ ಚಿಕ್ಕಮಗಳೂರಿನ ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್, ವಾಹೀದ್ ಹುಸೇನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ದತ್ತಜಯಂತಿಯ ಮೊದಲ ದಿನದಂದು ಮಹಿಳಾ ಭಕ್ತರು ಪೀಠಕ್ಕೆ ಹೋಗುವ ಮಾರ್ಗದಲ್ಲಿ ಆರೋಪಿಗಳು ಮೊಳೆ ಚೆಲ್ಲಿದ್ದರು. ಪರಿಣಾಮ ಪೊಲೀಸರ ವಾಹನಗಳು ಸೇರಿದಂತೆ ಸುಮಾರು ನಾಲ್ಕೈದು ಗಾಡಿಗಳು ಪಂಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದವು.ಬಂಧಿತ ಆರೋಪಿಗಳು ಹಾರ್ಡ್ವೇರ್ ಶಾಪ್ನಲ್ಲಿ 4 ಕೆಜಿ ತೂಕದ ಮೊಳೆಗಳನ್ನು ಖರೀದಿಸಿದ್ದರು ಎನ್ನಲಾಗಿದೆ.
ತಲೆಮರೆಸಿಕೊಂಡಿದ್ದ ಕೋರ್ಟಿಗೆ ಶರಣಾಗಿದ್ದಾನೆ. ಇದುವರೆಗೆ ಒಟ್ಟು ಮೂವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.