ಜೈಪುರ, ಡಿ 18 (DaijiworldNews/HR): ರಾಜಸ್ಥಾನದ ಜೈಪುರದಲ್ಲಿ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ದೂರದ ಪ್ರದೇಶದಲ್ಲಿ ಎಸೆದಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಜ್ ಶರ್ಮಾ ಎಂಬಾತ ದೆಹಲಿಯ ಕಾರ್ಯಕ್ರಮವೊಂದಕ್ಕೆ ಹೋಗಲು ಸಿದ್ಧನಾಗಿದ್ದ. ಆದರೆ ಆತನ ಚಿಕ್ಕಮ್ಮ ಸರೋಜ ಅವನನ್ನು ತಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಸರೋಜ್ಳ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ.
ಇನ್ನು ಅನುಜ್ ತನ್ನ ತಂದೆ, ಸಹೋದರಿ ಮತ್ತು ಅವರ ಚಿಕ್ಕಮ್ಮ ಸರೋಜ ಅವರೊಂದಿಗೆ ಜೈಪುರದ ವಿದ್ಯಾಧರ್ ನಗರದಲ್ಲಿ ವಾಸಿಸುತ್ತಿದ್ದು, ಅನುಜ್ ದೆಹಲಿಗೆ ಹೋಗಲು ಬಯಸಿದ್ದನು. ಆದರೆ, ಸರೋಜ ಅವರನ್ನು ತಡೆದಿದಕ್ಕೆ ವಾಗ್ವಾದ ಉಂಟಾಗಿ ಕೋಪದ ಭರದಲ್ಲಿ ಅವರು ಚಹಾ ಮಾಡುತ್ತಿದ್ದಾಗ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆಕೆಯ ದೇಹವನ್ನು ಮಾರ್ಬಲ್ ಕಟರ್ನಿಂದ 10 ತುಂಡುಗಳಾಗಿ ಕತ್ತರಿಸಿ ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ.
ಇನ್ನು ಅನುಜ್ ದೇಹದ ಭಾಗಗಳನ್ನು ಬಕೆಟ್ ಮತ್ತು ಸೂಟ್ಕೇಸ್ನಲ್ಲಿ ಸಾಗಿಸಿದ್ದು, ನಂತರ ಸರೋಜ್ ಕಾಣೆಯಾದ ದೂರನ್ನು ದಾಖಲಿಸಿದ್ದು, ಪೊಲೀಸರನ್ನು ದಾರಿತಪ್ಪಿಸಿದ್ದಾನೆ ಎನ್ನಲಾಗಿದ್ದು ಆರೋಪಿ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.