ನವದೆಹಲಿ, ಡಿ 18 (DaijiworldNews/HR): ಗುರುಗ್ರಾಮ್ ಸೆಕ್ಟರ್ 29ನಲ್ಲಿ ಅಪರಿಚಿತ ವ್ಯಕ್ತಿಗಳು ಚಾಲಕನನ್ನು ಬೆದರಿಸಿ ಆತನ ದುಬಾರಿ ಕಾರನ್ನೇ ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಅನೂಜ್ ಬೇಡಿ ಎಂಬ ವ್ಯಕ್ತಿ ತನ್ನ ಮರ್ಸಿಡೀಸ್ ಕಾರಿನಲ್ಲಿ ಮದ್ಯದ ಅಂಗಡಿಯಿಂದ ಮನೆಗೆ ವಾಪಾಸ್ ಆಗುತ್ತಿದ್ದು, ಈ ವೇಳೆ ಮೂತ್ರಕ್ಕೆಂದು ರಸ್ತೆ ಬದಿ ಕಾರು ನಿಲ್ಲಿಸಿದ್ದಾರೆ. ಅದೇ ಸಮಯಕ್ಕೆ ಯಾರೋ ಅಪರಿಚಿತರು ಮತ್ತೊಂದು ಕಾರಿನಲ್ಲಿ ಬಂದು, ಅನೂಜ್ ಅವರ ಕಾರಿನ ಪಕ್ಕದಲ್ಲಿ ವಾಹನ ನಿಲ್ಲಿಸಿದ್ದಾರೆ. ಅದರಿಂದ ಇಳಿದ ಒಬ್ಬ ವ್ಯಕ್ತಿ ಅನೂಜ್ ಅವರನ್ನು ಹಿಡಿದು, ಚಾಕುವಿನಿಂದ ಬೆದರಿಸಿ ಕೆಲ ಸಮಯದ ಬಳಿಕ ಅನೂಜ್ ಅವರ ಮರ್ಸಿಡೀಸ್ ಕಾರನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಅನೂಜ್ ದೂರು ದಾಖಲಿಸಿದ್ದಾರೆ.