ಉತ್ತರ ಪ್ರದೇಶ, ಡಿ 18 (DaijiworldNews/HR): ನಡೆದುಕೊಂಡು ಹೋಗುತ್ತಿದ್ದ ಭಿಕ್ಷುಕನಿಗೆ ಬೈಕ್ ಢಿಕ್ಕಿ ಹೊಡೆದಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸಿದ ಪೊಲೀಸರು ಗುರುತಿನ ಚೀಟಿಗಾಗಿ ಜೇಬು ಪರಿಶೀಲಿಸಿದ ವೇಳೆ ಅದರಲ್ಲಿದ್ದ ಕಂತೆ ಕಂತೆ ಹಣ ಕಂಡು ಬಂದಿರುವ ಘಟನೆ ಉತ್ತರ ಪ್ರದೇಶದ ಗೋರಕ್ಪುರದಲ್ಲಿ ನಡೆದಿದೆ.
ಶರೀಫ್ ಬಾಂಕ್(50 ) ಎಂಬ ಈ ಕಿವುಡು ಭಿಕ್ಷುಕನ ಜೇಬಿನಲ್ಲಿ 2,000 ಮುಖಬೆಲೆಯ ಬರೋಬ್ಬರಿ 3.64 ಲಕ್ಷ ರೂಪಾಯಿ ಪತ್ತೆ ಆಗಿದ್ದು, ಈತ ಉತ್ತರ ಪ್ರದೇಶದ ಪಿಪ್ರಾಚಿ ನಿವಾಸಿ ಎಂದು ಹೇಳಲಾಗಿದೆ.
ಇನ್ನು ಭಿಕ್ಷೆಯಿಂದಲೇ ಈತ ಇಷ್ಟೊಂದು ಹಣ ಗಳಿಸಿರಬಹುದು ಎಂದು ಪೊಲೀಸರು ಶಂಕಿಸಲಾಗಿದೆ.
ಅಪಘಾತದಲ್ಲಿ ಭಿಕ್ಷುಕನ ಕಾಲು ಮುರಿದಿದೆ ಎನ್ನಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಗುಣಮುಖನಾದ ಬಳಿಕ ವಿಚಾರಣೆ ನಡೆಸಿ ಹಣವನ್ನು ಮರಳಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.