ಒಡಿಶಾ, ಡಿ 17 (DaijiworldNews/HR): ಒಡಿಶಾದ ಅಗಲ್ಪುರದಲ್ಲಿ ಬಾಲಕರ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಯೊಬ್ಬನ ಕುತ್ತಿಗೆಗೆ ಚಾವೆಲಿನ್ ಚುಚ್ಚಿರುವ ಘಟನೆ ನಡೆದಿದೆ.
ವಾರ್ಷಿಕ ಕ್ರೀಡಾಕೂಟ ಸಮಾರಂಭದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್ ತ್ರೋ ಮಾಡಿದ್ದು, ಮೈದಾನದಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿ ಸದಾನಂದ ಮೆಹರ್ ಕುತ್ತಿಗೆಗೆ ಚುಚ್ಚಿದೆ.
ಇನ್ನು ಬಾಲಕನನ್ನು ತಕ್ಷಣವೇ ಭಿಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.