ನವದೆಹಲಿ, ಡಿ 17 (DaijiworldNews/HR): ಪ್ಯಾಕ್ ಮಾಡಲಾದ ಕುಡಿಯುವ ನೀರಿಗೆ ಅದರ ಬೆಲೆಗಿಂತ 5 ರೂ.ಗಳನ್ನು ಹೆಚ್ಚು ವಿಧಿಸಿದ್ದಕ್ಕಾಗಿ ಐಆರ್ಸಿಟಿಸಿ ಗುತ್ತಿಗೆದಾರನಿಗೆ ಭಾರತೀಯ ರೈಲ್ವೆಯ ಅಂಬಾಲಾ ವಿಭಾಗವು 1 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ.
ನೀರಿನ ಬಾಟಲ್ಗೆ 15 ರೂ. ಇದ್ದು, ಗುತ್ತಿಗೆದಾರ ನನ್ನಿಂದ 20 ರೂ. ಪಡೆದಿದ್ದಾನೆ ಎಂದು ರೈಲು ಪ್ರಯಾಣಿಕ ದಿನೇಶ್ ಎಂಬವರ ವಿರುದ್ದ ದೂರು ನೀಡಿದ್ದು, ಇದರ ಆಧಾರದ ಮೇಲೆ ಐಆರ್ಸಿಟಿಸಿ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಶಿವಂ ಭಟ್ ಎಂದು ಗುರುತಿಸಲಾದ ಪ್ರಯಾಣಿಕರೊಬ್ಬರು ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ದಿನೇಶ್ ಎಂಬ ವ್ಯಕ್ತಿಯಿಂದ ನೀರಿನ ಬಾಟಲಿಗೆ 5 ರೂ. ಪಡೆದಿದ್ದಾರೆ. ಅದರ ಬೆಲೆ 15 ರೂ ಎಂಆರ್ಪಿ ಇದ್ದರೂ ನೀರಿನ ಬಾಟಲಿಯನ್ನು 20 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ದೂರಿನ ನಂತರ, ದಿನೇಶ್ ಅವರ ಮ್ಯಾನೇಜರ್ ರವಿಕುಮಾರ್ ಅವರನ್ನು ರೈಲ್ವೆ ಕಾಯಿದೆಯ ಸೆಕ್ಷನ್ 144 (1) ಅಡಿಯಲ್ಲಿ ಲಕ್ನೋದಲ್ಲಿ ಬಂಧಿಸಲಾಗಿದ್ದು, ಮಂಜೂರಾತಿ ಪಡೆದು ಪರವಾನಗಿ ದಾಖಲೆಗಳನ್ನು ಪರಿಶೀಲಿಸಿದ ನಂತರ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಐಆರ್ಸಿಟಿಸಿ ಆರ್ಎಂಗೆ ತಿಳಿಸಲಾಗಿದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಮನ್ದೀಪ್ ಸಿಂಗ್ ಭಾಟಿಯಾ ತಿಳಿಸಿದ್ದಾರೆ.