ನವದೆಹಲಿ, ಡಿ. 15 (DaijiworldNews/SM): ರಾಜೀವ್ ಗಾಂಧಿ ಫೌಂಡೇಶನ್ ಚೀನಾದಿಂದ ಹಣ ಪಡೆದುಕೊಂಡಿದೆ. ಆ ಮೂಲಕ ಅಂದಿನಿಂದಲೇ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಭಾರತಾಂಬೆಯ ಕೈಯಡಿಯಲ್ಲಿದ್ದ ಭೂಭಾಗ ಯಾವ ರೀತಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪ್ರತ್ಯೇಕವಾಗಿ ನೆಹರು ಪ್ರಧಾನಿಯಾಗಿದ್ದಾಗ ಚೀನಾಕ್ಕೆ ಸೇರಿತು ಎಂಬುವುದು ಭಾರತೀಯರಿಗೆ ಗೊತ್ತಿರುವ ವಿಚಾರವಾಗಿದೆ. ರಾಹುಲ್ ಗಾಂಧಿಗೂ ಈ ಎಲ್ಲಾ ವಿಚಾರಗಳು ತಿಳಿದಿದ್ದರೂ ಅವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ರಾಜವರ್ಧನ್ ರಾಥೋಡ್ ಅವರು, ರಾಜೀವ್ ಗಾಂಧಿಯವರು ಭಾರತದ ಭೂ ಭಾಗ ಚೀನಾ ಕೈವಶವಾದಾಗ ಗಾಢ ನಿದ್ರೆಯಲ್ಲಿದ್ದರು ಎಂದು ಆರೋಪಿಸಿದ್ದಾರೆ. ಆ ಸಂದರ್ಭದಲ್ಲಿ ಭಾರತ ಸರಿಸುಮಾರು 37,000 ಚ. ಕೀ.ಮೀ. ಭೂಭಾಗವನ್ನು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಅವರು ಚೀನಾದೊಂದಿಗೆ ಉತ್ತಮ ನಂಟು ಹೊಂದಿದ್ದರು ಎಂದು ಆರೋಪಿದ್ದಾರೆ.