ನವದೆಹಲಿ, ಡಿ 16 (DaijiworldNews/DB): ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ಜಾಮೀನು ಕೋರಿ ದೆಹಲಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಸದ್ಯ ಆರೋಪಿ ಅಫ್ತಾಬ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ನ್ಯಾಯಾಲಯವು ಡಿಸೆಂಬರ್ 17ರಂದು ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ದೆಹಲಿಯ ಮಹ್ರೌಲಿಯ ಫ್ಲ್ಯಾಟ್ವೊಂದರಲ್ಲಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಶ್ರದ್ದಾಳನ್ನು ಮೇ ತಿಂಗಳಿನಲ್ಲಿ ಅಫ್ತಾಬ್ ಕತ್ತು ಹಿಸುಕಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು, ಬಳಿಕ ನಗರದ ವಿವಿಧೆಡೆ ಒಂದೊಂದೇ ಭಾಗಗಳನ್ನು ಬಿಸಾಡಿದ್ದ. ಈ ಹತ್ಯೆ ನಡೆದು ಸುಮಾರು ಏಳು ತಿಂಗಳ ಬಳಿಕ ಆರೋಪಿ ಸಿಕ್ಕಿಬಿದ್ದು, ಬಂಧಿಸಲ್ಪಟ್ಟಿದ್ದ.