ದೌಸಾ, ಡಿ 16 (DaijiworldNews/HR): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದಿಗೆ 100 ದಿನಕ್ಕೆ ಕಾಲಿಟ್ಟಿದೆ.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಕಾಲ್ನಡಿಗೆಯ ಮೆರವಣಿಗೆಯು ಶುಕ್ರವಾರ ತನ್ನ 100 ದಿನಗಳನ್ನು ಪೂರೈಸಿದ್ದು, ಈ ಯಾತ್ರೆಯು ಶುಕ್ರವಾರ ರಾಜಸ್ಥಾನದ ದೌಸಾದಿಂದ ಪುನರಾರಂಭಗೊಂಡಿದೆ.
ಇನ್ನು ವೈನಾಡ್ ಸಂಸದ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೆಳಿಗ್ಗೆ 6 ಗಂಟೆಗೆ ಮೀನಾ ಹೈಕೋರ್ಟ್, ದೌಸಾದಿಂದ ಪಾದಯಾತ್ರೆಯನ್ನು ಪುನರಾರಂಭಿಸಿ ಬಳಿಕ ಬೆಳಿಗ್ಗೆ 11 ಗಂಟೆಗೆ ಗಿರಿರಾಜ್ ಧರಣ್ ದೇವಸ್ಥಾನದಲ್ಲಿ ವಿರಾಮ ತೆಗೆದುಕೊಳ್ಳಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭಾ ಸಂಸದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, 'ಇಂದು ಭಾರತ್ ಜೋಡೋ ಯಾತ್ರೆಯ ಐತಿಹಾಸಿಕ ಪ್ರಯಾಣವು 100 ದಿನಗಳನ್ನು ಪೂರ್ಣಗೊಳಿಸುತ್ತದೆ. ದ್ವೇಷ, ಮತಾಂಧತೆ, ವಿಭಜನೆ, ಹಿಂಸೆ, ಅನ್ಯಾಯ, ನಿರುದ್ಯೋಗ ಮತ್ತು ಬೆಲೆ ಅಕ್ಕಿ ವಿರುದ್ಧ ದೇಶವನ್ನು ಒಂದುಗೂಡಿಸುತ್ತದೆ. ಈ ಯಾತ್ರೆ 8 ರಾಜ್ಯಗಳು ಮತ್ತು 2,763 ಕಿಮೀ ಸಂಚರಿಸಿದ್ದು, ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿದೆ. ಪ್ರೀತಿ ಮತ್ತು ಸೌಹಾರ್ದತೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.