ಮುಂಬೈ, ಡಿ 08 (DaijiworldNews/DB): ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯನ್ನು ವ್ಯಕ್ತಿಯನ್ನು ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದು, ಈ ವೇಳೆ ಆರೋಪಿಯು ತನ್ನ ಪತ್ನಿ ಎನ್ ಸಿಪಿ ಕಾರ್ಯಕರ್ತನೊಂದಿಗೆ ಓಡಿ ಹೋಗಿರುವುದೇ ಬೆದರಿಕೆ ಕರೆ ಮಾಡಲು ಲಾರಣ ಎಂಬುದಾಗಿ ಬಾಯ್ಬಿಟ್ಟಿದ್ದಾನೆ.
ತನ್ನ ಪತ್ನಿ ಎನ್ ಸಿಪಿ ಕಾರ್ಯಕರ್ತನೊಂದಿಗೆ ಓಡಿ ಹೋಗಿದ್ದಳು. ಆದರೆ ಈ ಬಗ್ಗೆ ನಾನು ಪಕ್ಷದ ಮುಖ್ಯಸ್ಥರೊಂದಿಗೆ ಹಲವು ಬಾರಿ ಅಳಲು ತೋಡಿಕೊಂಡಿದ್ದೆ. ಆದರೆ ಅವರು ಮಧ್ಯ ಪ್ರವೇಶಿಸದ ಕಾರಣ ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು 40 ವರ್ಷದ ಆರೋಪಿ ಪೊಲೀಸರೆದುರು ಹೇಳಿದ್ದಾನೆ.
ಪವಾರ್ ಅವರಿಗೆ ದೂರವಾಣಿ ಕರೆ ಮಾಡಿದ ಆರೋಪಿ ಜೀವ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಬುಧವಾರ ಆತನನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಬಿಹಾರಕ್ಕೆ ಆತ ವಾಸಸ್ಥಾನ ಬದಲಾಯಿಸುವುದಕ್ಕೂ ಮುನ್ನ ಪುಣೆಯಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ಅಲ್ಲಿ ಆತನ ಪತ್ಬಿಗೆ ಎನ್ ಸಿಪಿ ಕಾರ್ಯಕರ್ತನ ಪರಿಚಯವಾಗಿದ್ದು, ಬಳಿಕ ಆತನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು ಎಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.