ಬೆಂಗಳೂರು, ಡಿ 15 (DaijiworldNews/HR): ಪೊಲೀಸರಿಗೆ ಅಪರಾಧಿಗಳ ಸುಳಿವು ನೀಡುವ ವ್ಯಕ್ತಿಗಳಿಗೆ, ಬಹುಮಾನ ಮೊತ್ತವನ್ನು ಇಪ್ಪತ್ತು ಸಾವಿರ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅನುಮೋದನೆ ನೀಡಿದ್ದಾರೆ.
ಅಪರಾಧ ಪ್ರಕರಣದಲ್ಲಿ, ಉದ್ಘೋಷಿತ ಅಪರಾಧಿಗಳನ್ನು ಪತ್ತೆ ಮಾಡುವ, ರಾಷ್ಟ್ರೀಯ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಮಾದಕದ್ರವ್ಯ ಕಳ್ಳ ಸಾಗಣೆ, ಆಯುಧ ಕಳ್ಳ ಸಾಗಣೆ ಮತ್ತು ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ಸುಳಿವು ನೀಡುವ ವ್ಯಕ್ತಿಗಳಿಗೆ, ಬಹುಮಾನ ಮೊತ್ತವನ್ನು ಇಪ್ಪತ್ತು ಸಾವಿರ ರೂಪಾಯಿಗಳಿಂದ ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಪೊಲೀಸ್ ಮುಖ್ಯಸ್ಥರು ಸಲ್ಲಿಸಿದ ಪ್ರಸ್ತಾವನೆಗೆ ಸಚಿವರು ಇಂದು ಅಂಕಿತ ಹಾಕಿದ್ದಾರೆ.
ಇನ್ನು ಬಹುಮಾನದ ಮೊತ್ತವನ್ನು ಈ ಹಿಂದೆ 2017 ರಲ್ಲಿ ಪರಿಷ್ಕರಿಸಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ, ಐಜಿಪಿ ಅವರ ಆರ್ಥಿಕ ವಿತ್ತಾಧಿಕರದಲ್ಲಿ ಯಾವುದೇ ನಗದು ಪ್ರೋತ್ಸಾಹ ಧನವನ್ನು ನೀಡಿರುವುದಿಲ್ಲ.