ಬೆಂಗಳೂರು, ಡಿ 15 (DaijiworldNews/HR): ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿ ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಜಿಮ್ ಮಾಲೀಕನೊಬ್ಬನನ್ನು ಪೂರ್ವ ಬೆಂಗಳೂರಿನ ಎಚ್ಆರ್ಬಿಆರ್ ಲೇಔಟ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನ ಕುಟಕಲ್ಲೇಗೌಡ (27) ಬಂಧಿತ.
ಎಚ್ಆರ್ಬಿಆರ್ ಲೇಔಟ್ 1ನೇ ಬ್ಲಾಕ್ನಲ್ಲಿ ಟೊಯೊಟಾ ಎಟಿಯೋಸ್ ಜಿಡಿ ವಾಹನವನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ರಕ್ತಚಂದನದ ಮರವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಸುಳಿವು ಪಡೆದ ಪೊಲೀಸರು 12 ಲಕ್ಷ ರೂಪಾಯಿ ಮೌಲ್ಯದ 101 ಕೆಜಿ ರಕ್ತಚಂದನದ ಮರಗಳೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಚನ್ನಪಟ್ಟಣದಲ್ಲಿ ನಡೆಸುತ್ತಿದ್ದ ಜಿಮ್ನಲ್ಲಿ 35 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಕೋವಿಡ್ನಿಂದ ಅವನ ಜಿಮ್ ಉದ್ಯಮವನ್ನು ಹಾಳುಮಾಡಿತು. ಆತ ಹಲವೆಡೆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಆತ ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡಲು ಮತ್ತು ತ್ವರಿತ ಲಾಭವನ್ನು ಮಾಡಲು ನಿರ್ಧರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.