ಒಡಿಶಾ, ಡಿ 08 (DaijiworldNews/DB): ಪ್ರೀತಿಸಿದಾಕೆಯನ್ನು ವಿವಾಹವಾಗಲು ಇಷ್ಟವಿಲ್ಲದ್ದಕ್ಕೆ ಆಕೆಯನ್ನು ಪ್ರೇಮಿಯೊಬ್ಬ 49 ಬಾರಿ ಇರಿದು ಹತ್ಯೆ ಮಾಡಿದ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಜಗನ್ನಾಥ ಗೋಡಾ ಹತ್ಯೆ ಆರೋಪಿ. ಕುಣಿದಾರ್ ಸೀಮಾದಾಸ್ ಕೊಲೆಯಾದಾಕೆ. ಜಗನ್ನಾಥ ಮತ್ತು ಸೀಮಾದಾಸ್ ಪ್ರೀತಿಸುತ್ತಿದ್ದರು. ಆದರೆ ಆಕೆಯನ್ನು ಮಸುವೆಯಾಗುವುದಕ್ಕೆ ಆತನಿಗೆ ಇಚ್ಚೆ ಇರಲಿಲ್ಲ..ಈ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೈಯಲು ಈತ ಮೊದಲೇ ಯೋಜನೆ ರೂಪಿಸಿ ಗುಜರಾತ್ ಗೆ ಯುವತಿಯನ್ನು ಕರೆದೊಯ್ದಿದ್ದ. ಬಳಿಕ ಸ್ಥಳವೊಂದರಲ್ಲಿ ಆಕೆಗೆ 49 ಬಾರಿ ಮನಬಂದಂತೆ ಇರಿದಿದ್ದು, ಬಳಿಕ ನಿರ್ಜನ ಪ್ರದೇಶದ ಗದ್ದೆಯಲ್ಲಿ ಮೃತದೇಹವನ್ನು ಇರಿದು ಹೋಗಿದ್ದಾನೆ.
ಯುವತಿ ಕೊಲೆಯಾಗಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಮೃತದೇಹದಲ್ಲಿದ್ದ ಟಿ ಶರ್ಟ್ ಆಧರಿಸಿ ಆರೋಪಿಯನ್ನು ಹುಡುಕಾಡಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.