ಥಾಣೆ, ಡಿ 15 (DaijiworldNews/DB): ಮದ್ಯಪಾನಕ್ಕೆ ಹಣ ನೀಡಿಲ್ಲವೆಂದು ಕುಡುಕನೊಬ್ಬ ನೆರೆಮನೆಯ ಮಹಿಳೆಯನ್ನು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಥಾಣೆಯ ಡೋಂಬಿವಿಲಿ ಪ್ರದೇಶದಲ್ಲಿ ನಡೆದಿದೆ.
ಮಸೂದ್ ಕೊಲೆ ಮಾಡಿದ ಆರೋಪಿ. ಈತ ನೆರೆಮನೆಯ ಮಹಿಳೆ ಮತ್ತು ಅವರ ಮಗನಿಂದ ಆಗಾಗ ಹಣ ಪಡೆದುಕೊಳ್ಳುತ್ತಿದ್ದ. ಆದರೆ ಬುಧವಾರ ಆತನಿಗೆಹಣ ನೀಡಲು ಮಹಿಳೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಮಸೂದ್ ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.