ಬೆಂಗಳೂರು, ಡಿ 14 ( DaijiworldNews/MS): ಜೆಡಿಎಸ್ ಹಿರಿಯ ನಾಯಕ ವೈಎಸ್ ವಿ ದತ್ತ ಅವರು ಪಕ್ಷ ತೊರೆದು ಡಿ.17ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಅವರ ಅಪ್ತರ ಆಡಿಯೋ ಒಂದು ವೈರಲ್ ಆಗಿದೆ.
ವೈ.ಎಸ್.ವಿ.ದತ್ತ ಅವರ ಆಪ್ತ, ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣ ಅವರು ಮಾತಾನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ" ವೈ.ಎಸ್.ವಿ.ದತ್ತ ಅವರು ಕಾಂಗ್ರೆಸ್ ಸೇರಿಲಿರುವ ಬಗ್ಗೆ ಅಂತಿಮವಾಗಿ ನಿರ್ಧರಿಸಿರುವ ಕುರಿತು ದೂರವಾಣಿ ಮೂಲಕ ಹೇಳಿದ್ದಾರೆ" ಎಂದು ರಾಜಣ್ಣ ಆಡಿಯೋದಲ್ಲಿ ಹೇಳಿದ್ದಾರೆ.
ಡಿ. 15 ರಂದು ದತ್ತ ಅವರು ಸಿದ್ದರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದು ಅಂದು ಕಾಂಗ್ರೆಸ್ ಸೇರ್ಪಡೆ ವಿಚಾರ ಅಂತಿಮಗೊಳಿಸುವ ಸಾಧ್ಯತೆ ಇದೆ.
ಇನ್ನು ರಾಜಣ್ಣ ಅವರ ಆಡಿಯೋದಲ್ಲಿ ಇದೇ ಡಿ. 17 ರಂದು ಬೆಳ್ತಂಗಡಿಯಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾರ್ಯಕರ್ತರ ಮುಂದೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ದತ್ತ ಅವರ ಅಭಿಮಾನಿಗಳು ಬೆಳ್ತಂಗಡಿಗೆ ಬರಬಹುದು ಎಂದು ಹೇಳಲಾಗಿದೆ.