ಹೈದರಾಬಾದ್, ಡಿ 14 (DaijiworldNews/DB): ತಂದೆಯ ಸಾಲ ತೀರಿಸಲು ತನ್ನ ಮೂತ್ರಪಿಂಡವನ್ನೇ ಮಾರಲು ಯತ್ನಿಸಿದ್ದ ವಿದ್ಯಾರ್ಥಿನಿಯೊಬ್ಬಳು ಸೈಬರ್ ವಂಚಕರಿಂದ ವಂಚನೆಗೊಳಗಾಗಿ 16 ಲಕ್ಷ ರೂ. ಕಳೆದುಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಗುಂಟೂರಿನಲ್ಲಿ ನರ್ಸಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆ ಮಾಡಿದ್ದ 2 ಲಕ್ಷ ರೂ. ಸಾಲ ತೀರಿಸಲು ಮೂತ್ರಪಿಂಡವನ್ನೇ ಮಾರಾಟ ಮಾಡಲು ಯತ್ನಿಸಿದ್ದಾಳೆ. ಇದಕ್ಕಾಗಿ ಆನ್ಲೈನ್ ಮೂಲಕ ಅಪರಿಚಿತರನ್ನು ಸಂಪರ್ಕಿಸಿದ ಆಕೆಗೆ ಕಿಡ್ನಿಗೆ 3 ಕೋಟಿ ರೂ. ಆಪರ್ ನೀಡಿದ್ದಾರೆ. ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯನಾದ ಪ್ರವೀಣ್ರಾಜ್ ಎಂಬಾತ ಶೇ. 50 ಹಣವನ್ನು ಮೊದಲು ಕೊಡುವುದಾಗಿಯೂ ಉಳಿದದ್ದನ್ನು ಆಪರೇಶನ್ ಮುಗಿದ ನಂತರ ಕೊಡುವುದಾಗಿಯೂ ಹೇಳಿದ್ದಾನೆ. ಅಲ್ಲದೆ ಪೊಲೀಸ್ ವೆರಿಫಿಕೇಶನ್ ಹಾಗೂ ತೆರಿಗೆ ಹಣವಾಗಿ 16 ಲಕ್ಷ ರೂ. ಪಾವತಿಸಬೇಕೆಂದು ಆತ ಕೇಳಿದ್ದಾನೆ.
ಆತನ ಮಾತನ್ನು ನಂಬಿದ ವಿದ್ಯಾರ್ಥಿನಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ 16 ಲಕ್ಷ ರೂ.ಗಳನ್ನು ಪಾವತಿಸಿದ್ದಾಳೆ. ಹಣ ವರ್ಗಾವಣೆಗಾಗಿ ಚೆನ್ನೈ ಸಿಟಿ ಬ್ಯಾಂಕ್ನಲ್ಲಿ ಖಾತೆಯನ್ನೂ ತೆರೆದಿದ್ದಳು. ಹಣ ವರ್ಗಾಯಿಸಿದ ಬಳಿಕ 16 ಲಕ್ಷ ರೂ.ಗಳನ್ನು ಕೇಳಿದಾಗ ಅಪರಿಚತ ವ್ಯಕ್ತಿಗಳು ದೆಹಲಿಗೆ ಬಂದು ಹಣ ಪಡೆದುಕೊಳ್ಳುವಂತೆ ಹೇಳಿದ್ದಕ್ಕೆ ಆಕೆ ಅಪರಿಚಿತರು ನೀಡಿರುವ ವಿಳಾಸಕ್ಕೆ ಹೋಗಿ ನೋಡಿದಾಗ ಆ ವಿಳಾಸ ನಕಲಿಯಾಗಿರುವುದು ಕಂಡು ಬಂದಿದೆ. ಕೂಡಲೇ ವಂಚನೆಯ ಅರಿವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.