ನವದೆಹಲಿ, ಡಿ. 10 (DaijiworldNews/SM) : ತವಾಂಗ್ನಲ್ಲಿನ ಭಾರತ-ಚೀನಾ ಗಡಿ ಘರ್ಷಣೆಯ ಕುರಿತು ಸಂಸತ್ತಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ನೀಡಿದ ಹೇಳಿಕೆ "ಅಪೂರ್ಣ" ಎಂದು ಕಾಂಗ್ರೆಸ್ ಮಂಗಳವಾರ ಹೇಳಿದ್ದು, ಕೇಂದ್ರ ಸರ್ಕಾರವು ರಾಷ್ಟ್ರದಿಂದ ಸತ್ಯವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದೆ.
ರಾಜೀವ್ ಗಾಂಧಿ ಫೌಂಡೇಶನ್ನ ಎಫ್ಸಿಆರ್ಎ ನೋಂದಣಿ ರದ್ದುಪಡಿಸುವಂತಹ ಇತರ ವಿಷಯಗಳನ್ನು ಎತ್ತುವ ಮೂಲಕ ಸರ್ಕಾರವು ತವಾಂಗ್ ಘರ್ಷಣೆ ವಿಚಾರವನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ಕೂಡಲೇ ಸತ್ಯವನ್ನು ಹೇಳಬೇಕು ಮತ್ತು ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸಬಾರದು ಎಂದು ಕಾಂಗ್ರೆಸ್ ವಕ್ತಾರ ಮತ್ತು ಲೋಕಸಭೆಯ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಒತ್ತಾಯಿಸಿದರು.