ನವದೆಹಲಿ, ಡಿ 12 (DaijiworldNews/HR): ಭಾರತೀಯ ರೂಪಾಯಿ ಪ್ರತಿ ಕರೆನ್ಸಿ ವಿರುದ್ಧ ಪ್ರಬಲವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದ ಕರೆನ್ಸಿ ಅಪಮೌಲ್ಯೀಕರಣದ ಕುರಿತು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಬೆಳೆಯುತ್ತಿರುವ ಆರ್ಥಿಕತೆಯ ಬಗ್ಗೆ ಸಂಸತ್ತಿನಲ್ಲಿ ಕೆಲವರು ಅಸೂಯೆ ಹೊಂದಿದ್ದಾರೆ ಎಂದು ವಿಷಾದಿಸಿದ್ದಾರೆ.
ಇನ್ನು ಭಾರತೀಯ ರೂಪಾಯಿ ಪ್ರತಿ ಕರೆನ್ಸಿ ವಿರುದ್ಧ ಪ್ರಬಲವಾಗಿದ್ದು, ರಿಸರ್ವ್ ಬ್ಯಾಂಕ್ ಡಾಲರ್-ರುಪಾಯಿ ಏರಿಳಿತವು ಹೆಚ್ಚು ಹೋಗದಂತೆ ನೋಡಿಕೊಳ್ಳಲು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಬೇಕಾದ ವಿದೇಶಿ ವಿನಿಮಯ ಮೀಸಲುಗಳನ್ನು ಬಳಸಿದೆ ಎಂದು ತಿಳಿಸಿದ್ದಾರೆ.