ಭೋಪಾಲ್ , ಡಿ12 ( DaijiworldNews/MS): ಮಧ್ಯಪ್ರದೇಶದ ಮಾಜಿ ಸಚಿವ ಮತ್ತುಹಿರಿಯ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರು ಭಾಷಣದ ಮೂಲಕ ಭಾರೀ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. "ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ" ಎಂದು ಭಾಷಣದ ವೇಳೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಆರೋಪ ಕೇಳಿಬಂದಿದೆ.
ಸದ್ಯ ಕಾಂಗ್ರೆಸ್ ನಾಯಕ ಪಟೇರಿಯಾ ವಿವಾದಾತ್ಮಕ ಹೇಳಿಕೆ ವೈರಲ್ ಆಗಿದ್ದು, 'ಸಂವಿಧಾನವನ್ನು ರಕ್ಷಿಸಲು ಮೋದಿಯನ್ನು ಕೊಲ್ಲಲು ಜನರನ್ನು ಕೇಳುತ್ತಿದ್ದಾರೆ. ಪ್ರಧಾನಿ ಮೋದಿ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ಅವರು ವೀಡಿಯೊದಲ್ಲಿ ಆರೋಪಿಸುತ್ತಿದ್ದಾರೆ. ಇನ್ನು ಭಾಷಣ ವೇಳೆ ಕೊಲ್ಲುವುದು" ಎಂದರೆ "ಸೋಲಿಸುವುದು" ಎಂದು ತಕ್ಷಣವೇ ಸ್ಪಷ್ಟಪಡಿಸಿದರೂ ಈ ಮಾತುಗಳು ಅಷ್ಟೇನೂ ಅವರ ಸಹಾಯಕ್ಕೆ ಬಂದಿಲ್ಲ.
ವಿಡಿಯೋ ಬಹಿರಂಗವಾದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾಂಗ್ರೆಸ್ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿದ್ದಾರೆ.