ನವದೆಹಲಿ, ಡಿ 12 (DaijiworldNews/HR): ಡಿ.15 ಅಥವಾ 16ರಂದು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿರುವುದಾಗಿ ವರದಿಯಾಗಿದೆ.
ಪರೀಕ್ಷೆ ನಡೆಸಲಿರುವ ಹಿನ್ನಲೆಯಲ್ಲಿ ಬಂಗಾಲ ಕೊಲ್ಲಿಯಲ್ಲಿ ವಿಮಾನಗಳು ಹಾರಾಡದಂತೆ ನೋಟಿಸ್ ಟು ಏರ್ಮನ್/ನೋಟಿಸ್ ಟು ಏರ್ ಮಿಷನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ.
ನಾರ್ವೆಯ ಮಾರಿಟೈಮ್ ಆಪ್ಟಿಮಾ ಕಂಪೆನಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನದ ಗೂಢಚರ್ಯೆ ಹಡಗು 'ಯುವಾನ್ ವಾಂಗ್ 5' ಪ್ರವೇಶ ಮಾಡಿದೆ ಎಂಬ ಮಾಹಿತಿಯ ನಡುವೆಯೇ ಈ ಪರೀಕ್ಷೆ ನಡೆಯಲಿದೆ.
ಇನ್ನು ಅಗ್ನಿ-5 ಉಡಾವಣೆಯ ಮಾಹಿತಿ ತಿಳಿದೇ ವಿವಿಧ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಿರುವ ಚೀನಾದ ಪತ್ತೆದಾರಿ ಹಡಗು ಹಿಂದೂ ಮಹಾಸಾಗರ ಪ್ರವೇಶಿಸಿದೆ ಎಂದು ಹೇಳಲಾಗಿದೆ.