ಪ್ರಯಾಗ್ರಾಜ್, ಡಿ 11 (DaijiworldNews/DB): ಪೊಲೀಸ್ಲೈನ್ನ ಮೆಸ್ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಪ್ರತಿಭಟಿಸಿ ಬಳಿಕ ವರ್ಗಾವಣೆಗೊಂಡಿದ್ದ ಉತ್ತರಪ್ರದೇಶ ಪೊಲೀಸ್ ಪೇದೆ ಮನೋಜ್ಕುಮಾರ್ ಅವರ ವರ್ಗಾವಣೆಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.
ಫಿರೋಜ್ಬಾದ್ ಪೊಲೀಸ್ ಠಾಣೆಯಿಂದ 600 ಕಿಲೋ ಮೀಟರ್ ದೂರದಲ್ಲಿರುವ ಗಾಜಿಪುರ ಠಾಣೆಗೆ ವರ್ಗಾವಣೆ ಮಾಡಿರುವುದ್ನು ಪ್ರಶ್ನಿಸಿ ಮನೋಜ್ಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ವರ್ಗಾವಣೆ ಆದೇಶ ಆಡಳಿತಾತ್ಮಕ ಆಧಾರದ ಮೇಲಿದ್ದರೂ, ಪೊಲೀಸ್ ಮೆಸ್ನಲ್ಲಿ ನೀಡಲಾಗುವ ಕಳಪೆ ಆಹಾರದ ವಿರುದ್ದ ಪ್ರತಿಭಟಿಸಿದ್ದರಿಂದ ಈ ವರ್ಗಾವಣೆ ನಡೆದಿದೆ ಎಂದು ಮನೋಜ್ಕುಮಾರ್ ಪರ ವಕೀಲರು ವಾದಿಸಿದ್ದರು. ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಲಯವು ಪೇದೆಯ ವರ್ಗಾವಣೆಗೆ ತಡೆ ನೀಡಿತು. ಅಲ್ಲದೆ, ಮುಂದಿನ ನಾಲ್ಕು ವಾರಗಳೊಳಗಾಗಿ ಪ್ರತಿವಾದಿಗಳು ಅಫಿಡವಿಟ್ ಸಲ್ಲಿಸಬೇಕೆಂದು ನ್ಯಾಯಾಲಯವು ಸೂಚಿಸಿತು.
ಮರುಪ್ರಮಾಣಪತ್ರ ಸಲ್ಲಿಕೆ ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಅರ್ಜಿದಾರರು ಕೋರಿದ್ದು, ಫೆಬ್ರವರಿ 28ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅಲ್ಲಿಯವರೆಗೆ ವರ್ಗಾವಣೆ ಆದೇಶವನ್ನು ಜಾರಿಗೆ ತರಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.