ವಿಜಯವಾಡ, ಡಿ 11 (DaijiworldNews/HR): ಮಾಂಡೂಸ್ ಚಂಡಮಾರುತದಿಂದಾಗಿ ಆಂಧ್ರ ಪ್ರದೇಶದ ಆರು ಜಿಲ್ಲೆಗಳಲ್ಲಿ ತೀವ್ರತರವಾದ ಹಾನಿಯುಂಟಾಗಿದ್ದು, ನೆಲ್ಲೂರಿನಲ್ಲಿ, ಕೋವೂರು ಮಂಡಲದ ಇನಾಮಡುಗು ಗ್ರಾಮದಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ಭೂಕುಸಿತ ಸಂಭವಿಸಿದ್ದು, ಚಂಡಮಾರುತವು ದುರ್ಬಲಗೊಂಡಿದೆ ಮತ್ತು ನಂತರ ಪಶ್ಚಿಮಕ್ಕೆ ಚಲಿಸುವಾಗ ಮತ್ತಷ್ಟು ದುರ್ಬಲಗೊಂಡಿದೆ. ಚಂಡಮಾರುತದ ಪ್ರಭಾವದಿಂದಾಗಿ ನೆಲ್ಲೂರು, ತಿರುಪತಿ, ಚಿತ್ತೂರು, ಪ್ರಕಾಶಂ, ಅನ್ನಮಯ್ಯ, ಕಡಪ ಭಾಗಗಳಲ್ಲಿ ಭಾರಿ ಮಳೆಯಾಗಿದೆ.
ಇನ್ನು ಅತಿವೇಗದ ಗಾಳಿಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ನೆರಕ್ಕುರುಳಿರುವುದರಿಂದ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದು ಸಾವಿಗೀಡಾಗಿದ್ದು, ಗ್ರಾಮದ ಹಳೇ ಹರಿಜನವಾಡದ ದಾರ್ಲಾ ಶ್ರೀನಿವಾಸುಲು ಮೃತ ವ್ಯಕ್ತಿ.
ಕಾಲುವೆಗಳು ಮತ್ತು ಟ್ಯಾಂಕ್ಗಳು ತುಂಬಿ ಹರಿಯುತ್ತಿರುವ ಕಾರಣ ಹಲವು ಗ್ರಾಮಗಳ ನಡುವೆ ಸಾರಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಆರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.