ನವದೆಹಲಿ, ಡಿ 10 (DaijiworldNews/DB): ಆಮ್ ಆದ್ಮಿ ಪಕ್ಷವು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಬಿಜೆಪಿ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಎಎಪಿಯ 10 ಮಂದಿ ಕೌನ್ಸಿಲರ್ಗಳ ಖರೀದಿಗೆ ಬಿಜೆಪಿ100 ಕೋಟಿ ರೂ. ಆಫರ್ ನೀಡಿತ್ತು ಎಂದು ಎಎಪಿಯ ಕೌನ್ಸಿಲರ್ಗಳು ಆರೋಪಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಕೌನ್ಸಿಲರ್ಗಳಾದ ಡಾ. ರೊನಾಕ್ಷಿ ಶರ್ಮಾ, ಅರುಣ್ ನವಾರಿಯಾ ಹಾಗೂ ಜ್ಯೋತಿ ರಾಣಿ, ಪ್ರಜಾಪ್ರಭುತ್ವವನ್ನು ಹಣಬಲದಿಂದ ಕ್ಷೀಣಿಸುವ ಮೂಲಕ ಬಿಜೆಪಿ ಹೊಲಸು ರಾಜಕಾರಣ ಮಾಡುತ್ತಿದೆ. ಪ್ರತಿ ಕೌನ್ಸಿಲರ್ಗೆ 10 ಕೋಟಿ ರೂ. ಆಫರ್ ನೀಡಿ 10 ಕೌನ್ಸಿಲರ್ಗಳನ್ನು ಸೆಳೆಯುವ ತಂತ್ರ ಮಾಡಿದೆ ಎಂದರು.
ಅಡ್ಡ ಮತದಾನ ಮಾಡುವವರಿಗೂ ಹಣ ನೀಡುವ ತಂತ್ರ ಅನುಸರಿಸಿದೆ. ಪ್ರತಿ ಅಡ್ಡ ಮತದಾನಕ್ಕೆ 50 ಲಕ್ಷ ರೂ. ನಿಗದಿಗೊಳಿಸಿದೆ. ದೆಹಲಿ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ಬಾರದಂತೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಇದಕ್ಕೂ ಮುನ್ನ ಆಮ್ ಆದ್ಮಿ ಪಕ್ಷವು ಬಿಜೆಪಿ ಕೌನ್ಸಿಲರ್ಗಳಿಗೆ ಆಮಿಷ ಒಡ್ಡುತ್ತಿದೆ ಎಂಬುದಾಗಿ ಬಿಜೆಪಿ ಆರೋಪಿಸಿತ್ತು.