ಬೆಂಗಳೂರು, ಡಿ 10 (DaijiworldNews/HR): ಜನಸಂಕಲ್ಪ ಯಾತ್ರೆಯಿಂದ ನಾನು ದೂರ ಉಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯನಿಮಿತ್ತ ತುಮಕೂರಿಗೆ ಹೋಗಲು ಆಗಲಿಲ್ಲ. ಗುಜರಾತ್ ಮುಖ್ಯಮಂತ್ರಿ ಆಯ್ಕೆಗೆ ಹೋಗುತ್ತಿರುವುದರಿಂದ ಇವತ್ತೂ ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಿಲ್ಲ. ಗುಜರಾತ್ ಮುಖ್ಯಮಂತ್ರಿ ಆಯ್ಕೆ ಸಂಬಂಧ ಸಮಿತಿ ಮಾಡಿದ್ದಾರೆ, ನೀವೂ ಬರಬೇಕು ಅಂತ ನನಗೆ ಕರೆ ಬಂತು. ಹೀಗಾಗಿ ಅಹಮದಾಬಾದ್ ಗೆ ಹೊರಟಿದ್ದೇನೆ ಎಂದರು.
ಇನ್ನು ಗುಜರಾತ್ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಗಿಸಿ ಬೆಂಗಳೂರಿಗೆ ಬರುವೆ, ಗುಜರಾತ್ ನಿಂದ ಬಂದ ಮೇಲೆ ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.