ಬೆಂಗಳೂರು, ಡಿ 10 ( DaijiworldNews/MS): ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜಕೀಯ ಅಖಾಡ ರೆಡಿಯಾಗಿದ್ದು, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಜೆಡಿಎಸ್ ತಮ್ಮ ಕಾರ್ಯಚಟುವಟಿಕೆ ಚುರುಕುಗೊಳಿಸಿವೆ.
ಜೆ.ಪಿ ನಡ್ಡಾ ಡಿ.15ರಂದು ಆಗಮಿಸುತ್ತಿದ್ದು ಕೊಪ್ಪಳದಿಂದ 10ಕಡೆ ವರ್ಚುವಲ್ ರ್ಯಾಲಿ ನಡೆಸಲಿದ್ದಾರೆ. ಸಿದ್ದರಾಮಯ್ಯ ಜ.3ರಂದು ಉತ್ತರ ಕರ್ನಾಟಕದಲ್ಲಿ, ಡಿಕೆಶಿ ದಕ್ಷಿಣ ಕರ್ನಾಟಕದಲ್ಲಿ ಬಸ್ಯಾತ್ರೆ ನಡೆಸಲಿದ್ದಾರೆ.
ಎಚ್.ಡಿ ಕೆ ಕುಮಾರಸ್ವಾಮಿ ಡಿ.11ರಿಂದ ಚಿಕ್ಕನಾಯಕನಹಳ್ಳಿಯಿಂದ 2ನೇ ಹಂತದ ಪಂಚರತ್ನ ಯಾತ್ರೆ ಪ್ರಾರಂಭಿಸಲಿದ್ದಾರೆ. ಆ ಮೂಲಕ ರಾಜ್ಯ ರಾಜಕಾರಣ ರಂಗೇರತೊಡಗಿದೆ.