ನವದೆಹಲಿ, ಡಿ 10 (DaijiworldNews/DB): ಕಾಂಗ್ರೆಸ್ ನಾಯಕರೊಬ್ಬರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಕೆಲವೇ ಗಂಟೆಯಲ್ಲಿ ಮತ್ತೆ ಕಾಂಗ್ರೆಸ್ಗೆ ಮರಳುವುದಾಗಿ ಹೇಳಿದ ಪ್ರಸಂಗ ದೆಹಲಿಯಲ್ಲಿ ನಡೆದಿದೆ.
ದೆಹಲಿ ಕಾಂಗ್ರಸ್ ಉಪಾಧ್ಯಕ್ಷ ಅಲಿ ಮೆಹ್ದಿ ಅವರು ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ ಎಎಪಿ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ಕಾಂಗ್ರೆಸ್ಗೆ ಮರಳುವ ನಿರ್ಧಾರ ಪ್ರಕಟಿಸಿದ್ದು, ನಾನು ರಾಹುಲ್ ಗಾಂಧಿಯವರ ಕೆಲಸಗಾರ ಎಂದು ಹೇಳಿಕೊಂಡಿದ್ದಾರೆ.
ಇನ್ನು ಅಲಿ ಮೆಹ್ದಿ ಅವರೊಂದಿಗೆ ಎಎಪಿ ಸೇರ್ಪಡೆಯಾಗಿದ್ದ ಮುಸ್ತಾಫಾಬಾದ್ ಕಾಂಗ್ರೆಸ್ ಕೌನ್ಸಿಲರ್ ಸಬೀಲಾ ಬೇಗಂ ಮತ್ತು ಬ್ರಿಜ್ ಪುರ ಕೌನ್ಸಿಲರ್ ನಾಜಿಯಾ ಖಾಟೂನ್ ಅವರೂ ಕಾಂಗ್ರೆಸ್ಗೆ ಮರಳಲಿದ್ದಾರೆ. ಎಲ್ಲರೂ ಇಂದು (ಶನಿವಾರ) ಕಾಂಗ್ರೆಸ್ಗೆ ಮತ್ತೆ ಸೇರಿಕೊಳ್ಳಲಿದ್ದಾರೆ.
ಮೆಹ್ದಿ ಆಪ್ ಸೇರ್ಪಡೆಯಾಗುತ್ತಿದ್ದಂತೆ ಹಲವು ಕಾಂಗ್ರೆಸ್ ನಾಯಕರು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮೆಹ್ದಿ ಅವರೊಬ್ಬ ಹಾವಿನಂತೆ ಎಂಬುದಾಗಿ ಭಾರತೀಯ ಯುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಉಸ್ತುವಾರಿ ಮಂಜು ಜೈನ್ ಟ್ವೀಟಿಸಿದ್ದರು. ಇದೀಗ ಮತ್ತೆ ಕಾಂಗ್ರೆಸ್ಗೆ ಮರಳುವ ಅವರ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ.