ಚೆನ್ನೈ, ಡಿ 10 (DaijiworldNews/HR): ತಮಿಳುನಾಡಿಗೆ ಅಪ್ಪಳಿಸಿರುವ ಮಾಂಡೌಸ್ ಚಂಡಮಾರುತದಿಂದಾಗಿ ಶುಕ್ರವಾರ ರಾತ್ರಿ, ಚಂಡಮಾರುತ ಗಂಟೆಗೆ 75 ಕಿಮೀ ವೇಗದಲ್ಲಿ ತಮಿಳುನಾಡಿನ ಕರಾವಳಿಯನ್ನು ದಾಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪ್ರಭಾವಕ್ಕೆ ವಿಪರೀತ ಮಳೆಯಾಗಿದ್ದು, ರಾತ್ರಿ 10.30ರ ಹೊತ್ತಿಗೆ ಭೂಕುಸಿತ ಉಂಟಾಗಿದೆ. ಆ ಸಮಯದಲ್ಲಿ ತಮಿಳುನಾಡಿನ ಮಹಾಬಲಿಪುರಂ ಕರಾವಳಿ ಹಾಗೂ ಪುದುಚೇರಿ-ಶ್ರೀಹರಿಕೋಟಾ ಮಧ್ಯ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 75 ಕಿಮೀ ಇತ್ತು.
ಇನ್ನು ಚೆನ್ನೈನಲ್ಲಂತೂ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತಗೊಂಡಿದ್ದು, ನಗರದಾದ್ಯಂತ 200 ಮರಗಳು ಬುಡಸಮೇತ ಉರುಳಿಬಿದ್ದಿವೆ. ಚೆಂಗಲ್ಪಟ್ಟು ಜಿಲ್ಲೆಯ ಈಸ್ಟ್ ಕೋಸ್ಟ್ ರಸ್ತೆ ಮತ್ತು ಜಿಎಸ್ಟಿ ರಸ್ತೆಗಳಲ್ಲಿ ಕೂಡ ಮರ ಬಿದ್ದು, ಸಂಚಾರಕ್ಕೆ ತೊಡಕಾಗಿದೆ. ವಿದ್ಯುತ್ ಕಡಿತವೂ ಉಂಟಾಗಿದೆ.
ಮಾಂಡೌಸ್ನಿಂದಾಗಿ ಹವಾಮಾನ ಬದಲಾವಣೆಯಾಗಿದ್ದರಿಂದ ಮತ್ತು ಭೂಕುಸಿತ ಆಗುತ್ತಿರುವುದರಿಂದ ಚೆನ್ನೈ ಏರ್ಪೋರ್ಟ್ನಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ.