ಯಲ್ಲಾಪುರ, ಡಿ 9 (DaijiworldNews/HR): ಜನಾರ್ಧನ ರೆಡ್ಡಿ ಅವರು ಯಾವುದೇ ಕಾರಣಕ್ಕೂ ಬೇರೆ ಪಕ್ಷ ಕಟ್ಟುವುದಿಲ್ಲ. ಪರಮ ಸ್ನೇಹಿತನ ಬಗ್ಗೆ ನನಗೆ ಅರಿವಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನೂ ಕೂಡಾ ಅವರನ್ನು ನಮ್ಮ ಜೊತೆಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇಷ್ಟಾಗಿಯೂ ಬೇರೆ ಪಕ್ಷ ಕಟ್ಟಿದರೂ ನಮ್ಮಿಬ್ಬರ ಸ್ನೇಹದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗುವುದಿಲ್ಲ. ಸ್ನೇಹವೇ ಬೇರೆ ರಾಜಕಾರಣವೇ ಬೇರೆ ಎಂದರು.
ಇನ್ನು ಜನಾರ್ಧನ ರೆಡ್ಡಿ ನಮ್ಮ ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಅವರು ಬಿಜೆಪಿಯನ್ನು ಹಾಗೆ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದ ಹೇಳಿದ್ದಾರೆ.