ಶಿಮ್ಲಾ, ಡಿ 09 (DaijiworldNews/DB): ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಯಾಗಿರುವ ಪ್ರತಿಭಾ ಸಿಂಗ್ ಬೆಂಬಲಿಗರು ತಮ್ಮದೇ ಪಕ್ಷದ ನಾಯಕರೊಬ್ಬರು ವಾಹನ ತಡೆದ ಘಟನೆ ಇಂದು ನಡೆದಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಹಿಮಾಚಲಪ್ರದೇಶಕ್ಕೆ ಕಳುಹಿಸಲಾದ ನಾಯಕ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಬೆಂಗಾವಲು ಪಡೆಯನ್ನು ಶಿಮ್ಲಾದ ಒಬೆರಾಯ್ ಸೆಸಿಲ್ ಹೊರಗೆ ಜಮಾಯಿಸಿದ ಪ್ರತಿಭಾ ಸಿಂಗ್ ಬೆಂಬಲಿಗರು ತಡೆದು ಅವರ ಕಾರನ್ನು ಸುತ್ತುವರಿದರು. ಅಲ್ಲದೆ ಪ್ರತಿಭಾ ಸಿಂಗ್ ಪರ ಘೋಷಣೆ ಕೂಗಿದರು. ಇದರಿಂದ ಕೆಲ ಕಾಲ ಸ್ಥಳದಲ್ಲಿ ಸ್ವಲ್ಪ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಇಂದು ಮಧ್ಯಾಹ್ನ ಮಾತನಾಡಿದ್ದ ಪ್ರತಿಭಾ ಸಿಂಗ್, ಕೇಮದ್ರದ ಉನ್ನತ ನಾಯಕರು ನಮ್ಮೊಂದಿಗಿದ್ದು, ಯಾವುದೇ ಗುಂಪುಗಾರಿಕೆ ಇಲ್ಲ. ಚುನಾವಣೆಗೂ ಮುನ್ನ ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಮತ್ತು ಹೈಕಮಾಂಡ್ ನನಗೆ ನೀಡಿದ್ದಾರೆ. ಹೀಗಾಗಿ ರಾಜ್ಯ ಮುನ್ನಡೆಸುವ ನಾಯಕತ್ವ ನನ್ನಲ್ಲಿದೆ ಎಂದು ಭಾವಿಸುತ್ತೇನೆ ಎಂದಿದ್ದರು.