ಬೆಂಗಳೂರು, ಡಿ 08( DaijiworldNews/MS): 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗುಜರಾತಿನ ಈ ಫಲಿತಾಂಶ ಖಂಡಿತವಾಗಿಯೂ ದಿಕ್ಸೂಚಿಯಾಗಿದ್ದು ಸಂಸ್ಕೃತಿಯನ್ನು ರಕ್ಷಿಸುವ, ಭಾಜಪಾಗೆ ದೇಶದ ಜನ ಮಣೆ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟಿಸಿದೆ.
"ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಜಯ ಸಾಧಿಸಲಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಮನ್ನಣೆ ದೊರೆತಿದೆ. 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗುಜರಾತಿನ ಈ ಫಲಿತಾಂಶ ಖಂಡಿತವಾಗಿಯೂ ದಿಕ್ಸೂಚಿ" ಎಂದು ಹೇಳಿದೆ.
"ಹಿಂದೂ ವಿರೋಧಿ, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ನ್ನು ದೇಶಾದ್ಯಂತ ಜನರು ಬುಡಸಮೇತ ಕಿತ್ತು ಎಸೆಯುತ್ತಿದ್ದಾರೆ. ಸಂಸ್ಕೃತಿಯನ್ನು ರಕ್ಷಿಸುವ, ಅಭಿವೃದ್ಧಿಗೆ ಪಣತೊಟ್ಟಿರುವ ಭಾಜಪಾಗೆ ದೇಶದ ಜನ ಮಣೆ ಹಾಕಿದ್ದಾರೆ. ಇದು ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದೆ.