ಜಾರ್ಖಂಡ್, ಡಿ 08 (DaijiworldNews/DB): ಬೇಯಿಸಿದ ಅನ್ನ ಬಸಿದು ಟಬ್ನಲ್ಲಿ ಇರಿಸಲಾಗಿದ್ದ ಗಂಜಿಗೆ ಬಿದ್ದು ಸಹೋದರಿಯರಿಬ್ಬರು ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯ ತರ್ಹಾಸಿ ಬ್ಲಾಕ್ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.
ಸ್ಥಳೀಯ ಗ್ರಾಮದ ಪರಮೇಶ್ವರ ಸಾಹು ಅವರ ಪುತ್ರಿಯರಾದ ಸೌಂದರ್ಯ ಕುಮಾರಿ ಮತ್ತು ಶಿಬು ಮೃತಪಟ್ಟವರು. ಗಂಭೀರ ಗಾಯಾಳುಗಳಾಗಿದ್ದ ಇಬ್ಬರನ್ನೂ ರಾಂಚಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಿರಿಯ ಬಾಲಕಿ ಮಂಗಳವಾರ ಸಂಜೆ ಹಾಗೂ ಹಿರಿಯಾಕೆ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಾರ್ಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಚ್ಚಿದಾನಂದ ಮಹತೋ ತಿಳಿಸಿದ್ದಾರೆ.
ನವೆಂಬರ್ 24ರಂದು ಘಟನೆ ಸಂಭವಿಸಿತ್ತು. ಸೆಲ್ಲಾರಿ ಪಂಚಾಯತ್ನ ಛೇಚಣಿ ಮಿಡ್ಲ್ ಸ್ಕೂಲ್ನಲ್ಲಿ ಮಧ್ಯಾಹ್ನದ ಊಟಕ್ಕೆ ಬೇಯಿಸಿದ್ದ ಅನ್ನವನ್ನು ಬಸಿದು ಅದರ ಗಂಜಿಯನ್ನು ಪ್ರತ್ಯೇಕವಾಗಿ ಟಬ್ನಲ್ಲಿ ಇಡಲಾಗಿತ್ತು. ಬಾಲಕಿಯರಿಬ್ಬರು ಆಟವಾಡುತ್ತಾ ಬಂದು ಈ ಟಬ್ಗೆ ಬಿದ್ದಿದ್ದಾರೆ.