ಬೆಂಗಳೂರು, ಡಿ 08 (DaijiworldNews/DB): ವಿವಾದಗಳನ್ನು ಬೆಳೆಸಿ ರಾಜಕೀಯಕ್ಕೆ ಬಳಸುವ ಗುಣ ಬಿಜೆಪಿಗೆ ಹುಟ್ಟಿನಿಂದಲೇ ಬಂದಿದೆ. ಬೆಳಗಾವಿ ಗಡಿ ವಿವಾದ ವಿಚಾರದಲ್ಲೂ ಅದನ್ನೇ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಳಗಾವಿ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಎರಡೂ ಕಡೆಯು ಜನ ಆಕ್ರೋಶಗೊಂಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಕೂಡಲೇ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು. ಶಾಂತಿ ಕಾಪಾಡುವ ನಿಟ್ಟಿನಲ್ಲಿ ತತ್ ಕ್ಷಣ ಕ್ರಮ ವಹಿಸಬೇಕು ಎಂದರು.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ದ ಅತಿರೇಕದ ಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಸಿಎಂ ಬೊಮ್ಮಾಯಿಯವರು ಆ ರಾಜ್ಯದ ಮುಖ್ಯಮಂತ್ರಿಯನ್ನು ಕೂಡಲೇ ಸಂಪರ್ಕಿಸಿ ಅಲ್ಲಿರುವ ಕನ್ಮಡಿಗರ ರಕ್ಷಣೆಗೆ ಒತ್ತಾಯಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.
ಎದೆ ಬಡಿದುಕೊಂಡು ಡಬಲ್ ಎಂಜಿನ್ ಸರ್ಕಾರ ಎಂದರೆ ಸಾಲದು. ಉಭಯ ರಾಜ್ಯಗಳ ನಡುವೆ ಏರ್ಪಟ್ಟಿರುವ ವಿವಾದ ಬಗೆ ಹರಿಸಲು ಮುತುವರ್ಜಿ ವಹಿಸಬೇಕು. ಇದಕ್ಕಾಗಿ ಕೇಂದ್ರದ ನೆರವು ಪಡೆಯಲು ಮುಂದಾಗಬೇಕಯ ಎಂದವರು ಇದೇ ವೇಳೆ ಆಗ್ರಹಿಸಿದರು.