ನವದೆಹಲಿ, ಡಿ 08( DaijiworldNews/MS): ಗುಜರಾತ್ ಆಮ್ ಆದ್ಮಿ ಪಕ್ಷ ಗಳಿಸಿರುವ ಮತಗಳಿಂದ ನಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಗುರುವಾರ ಹೇಳಿದ್ದಾರೆ.
"ಮೊದಲ ಬಾರಿಗೆ, ಶಿಕ್ಷಣ ಮತ್ತು ಆರೋಗ್ಯವನ್ನು ಆಧರಿಸಿದ ರಾಜಕೀಯವು ದೇಶದಲ್ಲಿ ಮನ್ನಣೆ ಪಡೆಯುತ್ತಿದೆಅಲ್ಲದೆ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ. ಭಾರತದ ಜನರಿಗೆ ಅಭಿನಂದನೆಗಳು" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ಗಿಂತ ತೀರಾ ಹಿಂದುಳಿದಿದ್ದರೂ ಎಎಪಿ ಎಂಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.. ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಎಎಪಿ 2 ಸ್ಥಾನ ಗೆಲ್ಲಬೇಕು ಮತ್ತು ಶೇ.6ರಷ್ಟು ಮತ ಗಳಿಸಬೇಕು. ಗುಜರಾತ್ ಚುನಾವಣೆಯಲ್ಲಿ ಉತ್ತಮ ಪ್ರಚಾರ ನಡೆಸಿದ್ದ ಎಎಪಿ, ಎರಡಂಕಿ ಸ್ಥಾನ ಪಡೆಯುವುದು ಕಷ್ಟವೆಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು. ಇಷ್ಟಾಗಿಯೂ ಹೊಸ ಪಕ್ಷವಾಗಿ, ಬಿಜೆಪಿ ಅಬ್ಬರದ ನಡುವೆ ಗುಜರಾತ್ನಲ್ಲಿ ಎಎಪಿ ಬೆಳವಣಿಗೆ ಆಶಾದಾಯಕವಾಗಿದೆ.