ನವದೆಹಲಿ, ಡಿ 7 (DaijiworldNews/HR): ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಮತ್ತು ಮಮತಾ ಬ್ಯಾನರ್ಜಿಯವರ ನಿಕಟವರ್ತಿಯೆಂದು ಗುರುತಿಸಲ್ಪಡುವ ಸಾಕೇತ ಗೋಖಲೆ ಅವರನ್ನು ಗುಜರಾತ ಪೊಲೀಸರು ರಾಜಸ್ತಾನದ ಜಯಪುರ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ.
ಗುಜರಾತಿನ ಮೊರಬಿಯಲ್ಲಿ ಸೇತುವೆ ಕುಸಿದು ಜರುಗಿದ ದುರ್ಘಟನೆಯಲ್ಲಿ 135 ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ಮೋದಿಯವರು ಭೇಟಿ ನೀಡಿದ್ದರು. ಆ ಸಮಯದಲ್ಲಿ ಗೋಖಲೆಯವರು ಒಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಪಡೆದುಕೊಂಡಿರುವ ಮಾಹಿತಿಯ ಸಂದರ್ಭವನ್ನು ನೀಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ಪ್ರವಾಸಕ್ಕೆ 30 ಕೋಟಿ ರೂಪಾಯಿಗಳ ವೆಚ್ಚವಾಗಿರುವುದಾಗಿ ಟ್ವೀಟ ಮಾಡಿದ್ದರು.
ಪ್ರಧಾನಮಂತ್ರಿ ಮೋದಿಯವರ ಅಪಕೀರ್ತಿ ಮಾಡಿರುವ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಮೋದಿಯವರ ಸ್ವಾಗತಕ್ಕಾಗಿ 5 ಕೋಟಿ, ಕಾರ್ಯಕ್ರಮದ ಆಯೋಜನೆ, ಛಾಯಾಚಿತ್ರಗಳನ್ನು ತೆಗೆಯಲು ಐದೂವರೆ ಕೋಟಿ ವೆಚ್ಚವಾಗಿದೆ ಎಂದು ಲೆಕ್ಕವನ್ನು ಗೋಖಲೆಯವರು ತಮ್ಮ ಟ್ವೀಟನಲ್ಲಿ ಮಂಡಿಸಿದ್ದರು.