ಕೋಲ್ಕತ್ತಾ, ಡಿ 07 (DaijiworldNews/DB): ಗೂಂಡಾಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಿಜೆಪಿಗಾಗಿಯೇ ಸಾಗಿಸಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜಿ 20 ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುವ ಮುನ್ನ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜಕೀಯವಾಗಿ ಹೋರಾಟ ಮಾಡಬೇಕೇ ಹೊರತು, ಹಣ, ಶಸ್ತ್ರಾಸ್ತ್ರ, ಗೂಂಡಾಗಳನ್ನು ಬಳಸಿಕೊಂಡು ಅಲ್ಲ. ಬಿಜೆಪಿಯವರು ಈ ಕುರಿತು ತುರ್ತು ಗಮನ ಹರಿಸಬೇಕು ಎಂದರು.
ಬಿಹಾರ ಸಾರಿಗೆ ಅಧಿಕಾರಿಗಳು ನೀಡಿದ ನೋಂದಣಿ ಸಂಖ್ಯೆಯ ಎಸ್ಯುವಿ ಕಾರಿನಲ್ಲಿ ತಪಾಸಣೆ ನಡೆಸಿ ಜಲ್ಪೈಗುರಿ ಜಿಲ್ಲೆಯಲ್ಲಿ ಗುವಾಹಟಿಗೆ ಹೋಗುವ ವಾಹನದ ಸ್ಟೆಪ್ನಿಯಲ್ಲಿ 94 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.