ನವದೆಹಲಿ, ಡಿ 07 (DaijiworldNews/DB): ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ನಿರರ್ಥಕ. ಮೊದಲು ಭಾರತವನ್ನು ಒಡೆದು ಈಗ ಒಗ್ಗೂಡಿಸಲು ಹೊರಟಿದ್ದಾರೆ. ಆದರೆ ಭಾರತ ಅಖಂಡವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ನ ಮಹಿಳಾ ವಿಭಾಗ ದುರ್ಗಾ ವಾಹಿನಿಯ ಸಂಸ್ಥಾಪಕಿ ಸಾಧ್ವಿ ರಿತಂಬರ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಅಖಂಡ ರಾಷ್ಟ್ರ. ಅದನ್ನು ಮುರಿಯಲು ಯಾರಿಂದಲೂ ಅಸಾಧ್ಯ. ಇನ್ನು ರಾಹುಲ್ ಗಾಂಧಿಯವರು ಮಾಡುತ್ತಿರುವ ಪಾದಯಾತ್ರೆ ನಿರರ್ಥಕವಾಗಿದೆ. ಮೊದಲು ದೇಶ ಒಡೆದು, ಈಗ ಒಗ್ಗೂಡಿಸಲು ಹೊರಟಿದ್ದಾರೆ ಎಂದರು.
ಭಾರತ ಪ್ರಾಚೀನ ರಾಷ್ಟ್ರ. ದರೋಡೆಕೋರರು ನಮ್ಮ ಸಂಪತ್ತು ಲೂಟಿ ಮಾಡಿದ್ದಲ್ಲದೆ, 40 ಸಾವಿರ ಹಿಂದೂ ದೇವಾಲಯಗಳನ್ನು ನಾಶ ಮಾಡಿದರು. ಆದರೆ ನಾವು ಆ ದೇವಾಲಯಗಳನ್ನು ನವೀಕರಣಕ್ಕೆ ಹೆಜ್ಜೆ ಇಟ್ಟಿದ್ದೇವೆ. ಇದು ಹೆಮ್ಮೆಯ ವಿಚಾರ ಎಂದವರು ತಿಳಿಸಿದರು.