ನವದೆಹಲಿ, ಡಿ 07 (DaijiworldNews/DB): ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಜೀವ ಉಳಿಸಲು ರಕ್ತ ನೀಡಿದಂತೆ. ಇಂತಹ ನೆರವು ಉಗ್ರರಿಗೆ ಹೋಗದಂತೆ ತಡೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಭಾರತ-ಮಧ್ಯ ಏಷ್ಯಾ ರಾಷ್ಟ್ರಗಳ ಭದ್ರತಾ ಸಲಹೆಗಾರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಭಯೋತ್ಪಾದನೆ ದೇಶದ ಅಭಿವೃದ್ದಿಗಿರುವ ದೊಡ್ಡ ಸವಾಲಾಗಿದ್ದು, ಅವರಿಗೆ ಹಣಕಾಸಿನ ನೆರವು ನೀಡುವುದನ್ನು ತಡೆದು ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ತೊಡಗಿಸಿಕೊಳ್ಳುವುದು ಅತೀ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಹೊಸ ತಂತ್ರಜ್ಞಾನಗಳ ದುರುಪಯೋಗ ಹೆಚ್ಚುತ್ತಿದೆ. ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ, ಗಡಿಯಾಚೆಗಿನ ಭಯೋತ್ಪಾದನೆ, ನಕಲಿ ಉಗ್ರರ ಬಳಕೆ,ಮ ಸೈಬರ್ ತಾಣ ದುರುಪಯೋಗಪಡಿಸಿ ತಪ್ಪು ಮಾಹಿತಿ ಹರಡುವುದು ಮುಂತಾದವು ಭಯೋತ್ಪಾದನೆಯ ನಿರ್ಮೂಲನೆಗೆ ಸವಾಲಾಗುತ್ತಿದೆ. ಸಾಮೂಹಿಕ ಕ್ರಮಗಳ ಮೂಲಕ ಇವುಗಳನ್ನು ತಡೆಯುವುದು ಅತೀ ಅವಶ್ಯವಾಗಿದೆ ಎಂದವರು ತಿಳಿಸಿದರು.