ಪಶ್ಚಿಮ ಬಂಗಾಳ, ಡಿ 06 (DaijiworldNews/HR): ವ್ಯಕ್ತಿಯೊಬ್ಬ ಕುತ್ತಿಗೆ ಚುಚ್ಚಿದ ಶ್ರಿಶೂಲದೊಂದಿಗೆ ಬರೋಬ್ಬರಿ 65 ಕೀಮೀ ಪ್ರಯಾಣ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಭಾಸ್ಕರ್ ರಾಮ್ ಎಂಬವರ ಗಂಟಲಿಗೆಶ್ರಿಶೂಲವು ಸಿಲುಕಿಸಿಕೊಂಡಿದ್ದು, ಈತ ಅದರ ಶಸ್ತ್ರಚಿಕಿತ್ಸೆಗಾಗಿ ಕಲ್ಯಾಣಿಯಿಂದ ಕೋಲ್ಕತ್ತಾದ ಎನ್ಆರ್ಎಸ್ ವೈದ್ಯಕೀಯ ಕಾಲೇಜಿಗೆ ಕನಿಷ್ಠ 65 ಕಿಲೋಮೀಟರ್ ಪ್ರಯಾಣಿಸಿದ್ದಾರೆ.
ಇನ್ನು ಈ ವ್ಯಕ್ತಿ ಅಳದೆ, ಕಿರುಚಾಡದೇ, ಶಾಂತವಾಗಿ ಕುಳಿತ್ತಿದ್ದರು ಎಂದು ವೈದ್ಯರು ತಿಳಿಸಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಭಾಸ್ಕರ್ ರಾಮ್ ಬದುಕುಳಿಯುವ ಬಗ್ಗೆ ವೈದ್ಯರು ಸಂದೇಹ ವ್ಯಕ್ತಪಡಿಸಿದ್ದರೂ, ಆಶ್ಚರ್ಯಕರವಾಗಿ ತ್ರಿಶೂಲವು ಯಾವುದೇ ಅಂಗಗಳು, ರಕ್ತನಾಳಗಳು ಅಥವಾ ಅಪಧಮನಿಗಳಿಗೆ ಹಾನಿ ಮಾಡದ ಕಾರಣ ಅವರ ಪ್ರಕರಣವು ಈಗ ವೈದ್ಯಕೀಯ ಅದ್ಭುತವಾಗಿದೆ.
ಭಾಸ್ಕರ್ ರಾಮ್ ಹೇಗೆ ಗಾಯಗೊಂಡರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣ ಗುಣಮುಖರಾಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.