ನವದೆಹಲಿ, ಡಿ 06 (DaijiworldNews/HR): ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಗೋಲ್ಡಿ ಬ್ರಾರ್ ನನ್ನು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದು, ಇದೀಗ ಗೋಲ್ಡಿ ಬ್ರಾರ್ ಬಂಧನವಾಗಿಲ್ಲ ಎಂದು ವರದಿಯಾಗಿದೆ.
ಗೋಲ್ಡಿ ಬ್ರಾರ್ ನನ್ನು ಬಂಧಿಸಲಾಗಿದ್ದು, ಆತನನ್ನು ಶೀಘ್ರದಲ್ಲಿ ಅಮೆರಿಕಾದಿಂದ ಕರೆ ತರುತ್ತೇವೆ ಎಂದು ಮಾಧ್ಯಮದ ಮುಂದೆ ಬಂಧನದ ವಿಚಾರವನ್ನು ಅಧಿಕೃತವಾಗಿ ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದರು.
ಆದರೆ ಗೋಲ್ಡಿ ಬ್ರಾರ್ ಎನ್ನುವ ಪಾತಕಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ್ದು, ನಾನು ಅಮೆರಿಕಾದಲ್ಲಿಲ್ಲ, ನನ್ನನ್ನು ಯಾರೂ ಬಂಧಿಸಿಯೂ ಇಲ್ಲ ಎಂದು ಹೇಳಿದ್ದಾನೆ.