ಕೊಪ್ಪಳ, ಡಿ 05 (DaijiworldNews/HR): ಬಿಜೆಪಿಯಿಂದ ದೂರ ಉಳಿದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶೀಘ್ರವೇ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು, ಈ ನಡುವೆ ಶೀಘ್ರವೇ ಜನರಿಗೆ ಗುಡ್ ನ್ಯೂಸ್ ನೀಡುತ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 10 ದಿನಗಳಲ್ಲಿ ಗಂಗಾವತಿಯಲ್ಲಿ ಹೊಸ ಮನೆ ಗೃಹಪ್ರವೇಶ ಮಾಡುತ್ತೇನೆ. ಆದಷ್ಟು ಬೇಗವೇ ಜನರಿಗೆ ಗುಡ್ ನ್ಯೂಸ್ ನೀಡುತ್ತೇನೆ ಎಂದು ಹೇಳಿದ್ದು, ಹೊಸ ಪಕ್ಷ ಘೋಷಣೆ ಮಾಡಲಿದ್ದಾರ ಎನ್ನುವ ಅನುಮಾನ ಮೂಡಿದೆ.
ಇನ್ನು ಸಾರ್ವಜನಿಕ ಜೀವನದಲ್ಲಿ ಇರಲು ಗಂಗಾವತಿಗೆ ಬಂದಿದ್ದೇನೆ. ನಾನು ಹುಟ್ಟಿಬೆಳೆದಿದ್ದು ಬಳ್ಳಾರಿಯಲ್ಲಿ, ಈ ನೆಲ ನನಗೆ ಶಕ್ತಿ ಕೊಟ್ಟಿದೆ. 10 ವರ್ಷದ ಬಳಿಕ ನನಗೆ ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ.ಪ್ರತಿಬಾರಿಯೂ ನಾನು ಬೆಂಗಳೂರಿಗೆ ಹೋಗಲು ಆಗಲ್ಲ. ಹೀಗಾಗಿ ಗಂಗಾವತಿಯಲ್ಲೇ ಮನೆ ಮಾಡಿ ಇರುತ್ತೇನೆ ಎಂದಿ