ಜೈಪುರ, ಡಿ 04 (DaijiworldNews/DB): ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೋಚಿಂಗ್ ಸೆಂಟರ್ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ವರ ತಂಡ ಗುಂಡಿನ ದಾಳಿ ನಡೆಸಿ ಕೊಲೆಗೈದ ಘಟನೆ ಜೈಪುರದಲ್ಲಿ ನಡೆದಿದೆ.
ತಾರಾಚಂದ್ ಕಡ್ವಾಸರ ಮೃತ ವ್ಯಕ್ತಿ. ಸಿಕರ್ ನಗರದ ಪಿಪ್ರಾಲಿ ರಸ್ತೆಯಲ್ಲಿರುವ ಗ್ಯಾಂಗ್ ಸ್ಟರ್ ರಾಜು ಥೇತ್ ಎಂಬಾತನ ಮನೆ ಮುಂಭಾಗದಲ್ಲಿ ನಾಲ್ವರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ರಾಜು ಥೇತ್ ಮೃತಪಟ್ಟಿದ್ದಾನೆ. ಗ್ಯಾಂಗ್ವಾರ್ ನಡೆಯುತ್ತಿದ್ದ ವೇಳೆ ತಾರಾಚಂದ್ ಅದೇ ದಾರಿಯಲ್ಲಿ ಈತ ತಮ್ಮ ಮಗಳನ್ನು ಕೋಚಿಂಗ್ ಸೆಂಟರ್ಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಅವರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅವರ ಸೋದರ ಸಂಬಂಧಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜು ಥೇತ್ ಶೇಖಾವತಿ ಇನ್ನೊಂದು ಗ್ಯಾಂಗ್ನೊಂದಿಗೆ ವಿರೋಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಗ್ಯಾಂಗ್ವಾರ್ನ ಹೊಣೆಗಾರಿಕೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವನೆಂದು ಪರಿಚಯಿಸಿಕೊಂಡ ರೋಹಿತ್ ಗೋಡಾರಾ ಹೊತ್ತಿಕೊಂಡಿದ್ದಾನೆ. ಆನಂದಪಾಲ್ ಸಿಂಗ್ ಮತ್ತು ಬಲ್ಬೀರ್ ಬಾನುಡಾಗೆ ಪ್ರತೀಕಾರವಾಗಿ ಥೇತ್ ಹತ್ಯೆ ನಡೆದಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.