ಮುಂಬೈ, ಡಿ 03(DaijiworldNews/MS): ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಸಿಎಂ ಬೊಮ್ಮಾಯಿಗೆ ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ವಾತಾವರಣ ಸರಿಯಿಲ್ಲ ಈಗ ಬರಬೇಡಿ ಎಂದು ಕರ್ನಾಟಕದ ಮನವಿ ತಿರಸ್ಕರಿಸಿರುವ ಚಂದ್ರಕಾಂತ ಪಾಟೀಲ್,
ಡಿಸೆಂಬರ್ 6ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದು ಸವಾಲು ಹಾಕಿದ್ದಾರೆ. ಕರ್ನಾಟಕದ ಸಿಎಂ ಹೇಳಿಕೆಗೆ ಪ್ರತ್ಯುತ್ತರ ನೀಡಲು ಹೋಗುತ್ತೇನೆ. ಅಲ್ಲಿಗೆ ಹೋಗಿ ತಕ್ಕ ಉತ್ತರ ನೀಡುತ್ತೇನೆ
ಜೊತೆಗೆ ನಾನು ಯಾರಿಗೂ ಹೆದರಲ್ಲ. ಅಲ್ಲಿಗೆ ತೆರಳಿ, ಶಿವಾಜಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತೇನೆ ಎಂದಿದ್ದಾರೆ.