ತನೋಡಿಯಾ, ಡಿ 02 (daijiworldNews/HR): ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಚಹಾ ಕುಡಿಯಲು ನಿಂತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನಾಯಿಯೊಂದು ಹೂಗುಚ್ಛ ನೀಡಿ ಸ್ವಾಗತಿಸಿ ಗಮನ ಸೆಳೆಯಿತು.
ಕಾಂಗ್ರೆಸ್ ನಾಯಕ ರಾಹುಲ್ ಅವರನ್ನು ಆರು ವರ್ಷದ ಲ್ಯಾಬ್ರಡಾರ್ ಶ್ವಾನಗಳ ಮಾಲೀಕರಾದ ಸರ್ವಮಿತ್ರ ನಾಚನ್ ಅವರು ಸ್ವಾಗತಿಸಲು ತನ್ನ ತನೋಡಿಯಾ ಪಟ್ಟಣಕ್ಕೆ ಬಂದಿದ್ದು, ಲಿಜೋ ಮತ್ತು ರೆಕ್ಸಿ ಎಂಬ ನಾಯಿಗಳು ಚಲೇ ಕದಮ್, ಜೂಡ್ ವತನ್ ಮತ್ತು ನಫ್ರತ್ ಛೋಡೋ, ಭಾರತ್ ಜೋಡೋ ಎಂಬ ಸಂದೇಶಗಳುಳ್ಳ ಹೂಗುಚ್ಛಗಳ ಬುಟ್ಟಿಯನ್ನು ಹಿಡಿದು ತಂದು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದೆ.
ಇನ್ನು ನಾವು ಯಾತ್ರೆಗಾಗಿ ವಿಭಿನ್ನವಾದದ್ದನ್ನು ಮಾಡಲು ಬಯಸಿದ್ದು, ನಾವು ಅದನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದೇವೆ ಮತ್ತು ಗಾಂಧಿ ಅವರಿಗೆ ಹೂಗುಚ್ಛಗಳನ್ನು ಹಸ್ತಾಂತರಿಸಲು ನಾವು ನಾಯಿಗಳಿಗೆ ತರಬೇತಿ ನೀಡಿದ್ದೇವೆ ಎಂದು ಇಂದೋರ್ ಮೂಲದ ನಾಚನ್ ಹೇಳಿದ್ದಾರೆ.