ಕಣ್ಣೂರು, ಡಿ 02 (DaijiworldNews/DB): ಕಮ್ಯನಿಸಂನ್ನು ಇಡೀ ವಿಶ್ವವೇ ತಿರಸ್ಕರಿಸಿದೆ. ಕೇರಳ ಸೇರಿದಂತೆ ವಿವಿಧೆಡೆ ಶೀಘ್ರ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿ ಸೇರುವುದು ನಿಶ್ಚಿತ ಎಂದು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೇರಳದ ಕಣ್ಣೂರಿನಲ್ಲಿ ಮಾತನಾಡಿದ ಅವರು, ಚೀನಾ ಒಂದು ಕಾಲದಲ್ಲಿ ಕಮ್ಯುನಿಸಂನ ಗಂಗೋತ್ರಿಯಾಗಿತ್ತು. ಆದರೆ ಈಗ ಅಲ್ಲೂ ಕಮ್ಯುನಿಸಂ ತಿರಸ್ಕೃತಗೊಂಡಿದೆ. ಇಡೀ ವಿಶ್ವದಲ್ಲಿ ಕಮ್ಯುನಿಸಂಗೆ ಇದೇ ಪರಿಸ್ಥತಿ ಇದೆ. ಅಪ್ರಾಯೋಗಿಕ ಮತ್ತು ವಿಫಲ ಸಿದ್ದಾಂತ ಒಳಗೊಂಡ ಕಮ್ಯುನಿಸಂ ಕೇರಳ ಸಹಿತ ಎಲ್ಲೆಡೆ ತಿರಸ್ಕೃತಗೊಳ್ಳುವ ದಿನ ದೂರವಿಲ್ಲ ಎಂದರು.
ಕೇರಳದ ಯುವ ಶಕ್ತಿ ಬದಲಾವಣೆಗೆ ಹಾತೊರೆಯುತ್ತಿದೆ. ಅವರ ಆಸಕ್ತಿಯನ್ನು ಗಮನಿಸಿದರೆ ಕೇರಳದಲ್ಲಿ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇತಿಹಾಸದ ಕಸದ ಬುಟ್ಟಿಗೆ ಸೇರುವ ದಿನಗಳು ಸನಿಹದಲ್ಲೇ ಇವೆ ಎಂದು ನಾನು ಬರೆದು ಕೊಡಬಲ್ಲೆ ಎಂದವರು ಹೇಳಿದರು.