ಮುಂಬೈ, ಡಿ 02 (daijiworldNews/HR): ಗುಜರಾತ್ನ ಉದ್ವಾಡ ಮತ್ತು ವಾಪಿ ನಿಲ್ದಾಣಗಳ ನಡುವೆ ಗಾಂಧಿನಗರ-ಮುಂಬೈ ವಂದೇ ಭಾರತ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ದನಕ್ಕೆ ಢಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನ ಮುಂಭಾಗದ ಪ್ಯಾನೆಲ್ಗೆ ಕೊಂಚ ಹಾನಿಯಾಗಿದ್ದು, ಎರಡು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ ನಂತರ ಈ ಮಾರ್ಗದಲ್ಲಿ ಸೆಮಿ-ಹೈ ಸ್ಪೀಡ್ ರೈಲಿಗೆ ಎದುರಾದ ನಾಲ್ಕನೇ ಘಟನೆಯಾಗಿದೆ.
ಇನ್ನು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಮಾತನಾಡಿ, ಉದ್ವಾಡ ಮತ್ತು ವಾಪಿ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 87 ರ ಬಳಿ ಗುರುವಾರ ಸಂಜೆ 6.23 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕಾರ್ಯಾಚರಣೆಯ ಬಳಿಕ ರೈಲು ಪ್ರಯಾಣವನ್ನು ಪುನರಾರಂಭಿಸಿದೆ ಎಂದು ತಿಳಿಸಿದ್ದಾರೆ.