ನಂಜನಗೂಡು, ಡಿ 01 (DaijiworldNews/MS): ಶೋಷಣೆ, ದೌರ್ಜನ್ಯ ಮಾಡಲು ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇರಬೇಕೆಂದು ಆರೆಸ್ಸೆಸ್ ಬಯಸುತ್ತದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಂಜನಗೂಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, " ಶೋಷಣೆಗೊಳಗಾದ ಜನರಿಗೆ ಮೀಸಲಾತಿ ನೀಡಬೇಕೆಂಬುದು ಅಂಬೇಡ್ಕರ್ ಆಶಯವಾಗಿತ್ತು. ಆದರೆ, ಪ್ರಧಾನಿ ಮೋದಿಯವರು ಮೇಲ್ವರ್ಗದ ಸಾಮಾನ್ಯ ಸಮುದಾಯದ ಬಡವರಿಗೂ ಸಹ ಶೇ.10ರಷ್ಟು ಮೀಸಲಾತಿ ನೀಡಿದರು. ಹೀಗಾದರೆ, ಸಮಾಜದಲ್ಲಿ ಹೇಗೆ ಸಮಾನತೆ ಬರಲು ಸಾಧ್ಯ" ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ಎಂದಿಗೂ ಸಮಾಜದಲ್ಲಿ ಬದಲಾವಣೆ ಬಯಸುವುದಿಲ್ಲ. ಜಾತಿ ವ್ಯವಸ್ಥೆ ಇದೇ ರೀತಿ ಮುಂದುವರಿಯಲು ಇಷ್ಟ ಪಡುತ್ತದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ಇವರಿಗೆ ಶೋಷಣೆ ಮಾಡಲು ಆಗುವುದಿಲ್ಲ. ಇದಕ್ಕಾಗಿಯೇ ಮುಸಲ್ಮಾನರನ್ನು ಬೆದರು ಬೊಂಬೆ ಮಾಡಿಕೊಂಡು ದೇಶ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.