ಪುಣೆ, ಡಿ 01 (DaijiworldNews/HR): ಭಾರತೀಯ ವಾಯುಪಡೆಯ (ಐಎಎಫ್) ಚೇತಕ್ ಹೆಲಿಕಾಪ್ಟರ್ ಮಹಾರಾಷ್ಟ್ರದ ಪುಣೆಯ ಬಾರಾಮತಿ ವಾಯುನೆಲೆಯ ತೆರೆದ ಪ್ರದೇಶದಲ್ಲಿ ಗುರುವಾರ ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತು ವಾಯುಪಡೆಯ ಪಿಆರ್ಒ ವಿಂಗ್ ಕಮಾಂಡರ್ ಆಶಿಶ್ ಮೋಘೆ ಮಾಹಿತಿ ನೀಡಿದ್ದು, 'ಐಎಎಫ್ನ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ ಬಾರಾಮತಿ ಏರ್ಫೀಲ್ಡ್ನ (ಪುಣೆ ಜಿಲ್ಲೆಯಲ್ಲಿರುವ) ತೆರೆದ ಪ್ರದೇಶದಲ್ಲಿ ಇಂದು ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ' ಎಂದು ತಿಳಿಸಿದ್ದಾರೆ.
ಇನ್ನು ಹೆಲಿಕಾಪ್ಟರ್ ನಲ್ಲಿದ್ದ ಸಿಬ್ಬಂದಿ ಮತ್ತು ವಿಮಾನ ಇಬ್ಬರೂ ಸುರಕ್ಷಿತವಾಗಿದ್ದು, ಸದ್ಯ ಹೆಲಿಕಾಪ್ಟರ್ನ ಚೇತರಿಕೆ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.