ನವದೆಹಲಿ, ಡಿ 01 (DaijiworldNews/MS): ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪ ಮುಕ್ತಗೊಂಡಿರುವುದರ ವಿರುದ್ಧ ದೆಹಲಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪಟಿಯಾಲ ಹೌಸ್ ಕೋರ್ಟ್ ಆಗಸ್ಟ್ 18, 2021 ರಂದು ನೀಡಿದ ತೀರ್ಪಿನಲ್ಲಿ ತರೂರ್ ಅವರ ಪತ್ನಿಯ ಸಾವಿಗೆ ಸಂಬಂಧಿಸಿದಂತೆ ಆರೋಪ ಮುಕ್ತಗೊಳಿಸಿತ್ತು.,
ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸುವಲ್ಲಿ 'ವಿಳಂಬವನ್ನು ಕ್ಷಮಿಸಿ' ಎಂದು ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇಲೆ ದೆಹಲಿ ಹೈಕೋರ್ಟ್ ತರೂರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಫೆಬ್ರವರಿ 7, 2023 ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.
ಶಶಿ ತರೂರ್ ಪರ ವಾದಿಸಿದ ಹಿರಿಯ ವಕೀಲ ವಿಕಾಸ್ ಪಾಶ್ವ, ಕೆಳ ನ್ಯಾಯಾಲಯಗಳು ನೀಡಿದ ವಿವಿಧ ಆದೇಶಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟರು. ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿತರೂರ್ ಅವರನ್ನು ದೆಹಲಿ ಕೋರ್ಟ್ 2021, ಆಗಸ್ಟ್ 18 ರಲ್ಲಿ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿರುವುದಾಗಿ ತಿಳಿಸಿದರು.